‘ಕಳೆದ ವಾರ ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಸಂಭವಿಸಿದ್ದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿತ್ತು. ಸೂಚನೆಯಂತೆ ಬೆಂಗಳೂರಿಗೆ ‘ಯೆಲ್ಲೊ ಅಲರ್ಟ್’ ಕೂಡ ಘೋಷಿಸಲಾಗಿತ್ತು. ಆದರೆ, ಮೇಲ್ಮೈ ಸುಳಿಗಾಳಿ ತಮಿಳುನಾಡು ಕರಾವಳಿಯಿಂದ ದೂರ ಸರಿದಿದೆ. ಹಾಗಾಗಿ, ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮಳೆ ದಿಢೀರ್ ತಗ್ಗಿದೆ’ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದರು.