ರಾಜಕಾಲುವೆ ಮೇಲೆಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇಂತಹ ಒತ್ತುವರಿಯಿಂದ ಹಿಮ್ಮುಖವಾಗಿ ಮಳೆ ನೀರು ಹರಿದು ಸುತ್ತಮುತ್ತ ಬಡಾವಣೆಗೆ ನುಗ್ಗಿ ಬರುತ್ತಿದೆ. ಮನೆಯಲ್ಲಿರುವ ದವಸ ಧಾನ್ಯ, ಬಟ್ಟೆ, ಫ್ರಿಡ್ಜ್, ಟಿವಿ ಹಾಳಾಗಿದೆ. ರಾತ್ರಿಯೆಲ್ಲಾ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಸ್ಥಳೀಯ ನಿವಾಸಿ ಬೃಂದಾ ಅಳಲು ತೋಡಿಕೊಂಡರು. ಮಳೆ ನೀರು ಜೊತೆಗೆ ಒಳಚರಂಡಿ ನೀರು ಸೇರಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.