ಜೆ.ಪಿ. ಪಾರ್ಕ್ನಲ್ಲಿ ₹19 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆ ಪರಿಶೀಲನೆ ನಡೆಸಿದ ಅವರು, ‘80 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಹರಡಿಕೊಂಡಿರುವ ಜೆ.ಪಿ.ಪಾರ್ಕ್ನ್ನು ಅಭಿವೃದ್ಧಿಗೊಳಿಸಿ ರೈಲ್ವೆ ಟ್ರ್ಯಾಕ್, ಕಲ್ಯಾಣಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಕೃಷ್ಣರಾಜೇಂದ್ರ ಒಡೆಯರ್, ಮಾಗಡಿ ಕೆಂಪೇಗೌಡ, ವಿದ್ವಾಂಸರ, ಕವಿಗಳ, ಪ್ರಸಿದ್ಧ ಕಲಾವಿದರ ಹಾಗೂ ಪ್ರಾಣಿಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು’ ಎಂದರು.