ಪ್ರತಿ ವರ್ಷ ನ.1ರಂದು ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ. ಈ ನಿಟ್ಟಿನಲ್ಲಿ ಅರ್ಹರನ್ನು ಆಯ್ಕೆ ಮಾಡಲು ರಚಿಸಲಾದ ಸಮಿತಿಯಲ್ಲಿ ಪ್ರೊ. ದೊಡ್ಡರಂಗೇಗೌಡ, ಬಿ.ವಿ. ವಸಂತಕುಮಾರ್, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಬಾನಂದೂರು ಕೆಂಪಯ್ಯ, ನಿರುಪಮಾ ರಾಜೇಂದ್ರ,ಅಡ್ಡಂಡ ಕಾರ್ಯಪ್ಪ,ರಹೀಂ ಉಚ್ಚಿಲ, ಬಿ.ವಿ. ರಾಜಾರಾಮ್, ಶಾಂತರಾಮ್ ಸಿದ್ದಿ, ಟಿ.ಎಸ್. ನಾಗಾಭರಣ, ತಾರಾ ಅನೂರಾಧ,ಅಜಕ್ಕಳ ಗಿರೀಶ್ ಭಟ್, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಮಹದೇವ ಪ್ರಕಾಶ್, ಸಿ.ಎಸ್. ಕೃಷ್ಣ ಶೆಟ್ಟಿ ಹಾಗೂ ಕರಿಜಟ್ಟಿ ರುದ್ರಪ್ಪ ಸದಸ್ಯರಾಗಿದ್ದಾರೆ.