‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ರಾಜ್ಯದ ವೀರ ಸೇನಾನಿಗಳ ತ್ಯಾಗ, ಬಲಿದಾನವನ್ನು ಸಾರುವುದು ನಾಟಕದ ಉದ್ದೇಶ. ದೆಹಲಿಯ ಕರ್ನಾಟಕ ಸಂಘದ 75ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶಿಸಲಾಗುತ್ತಿದೆ’ ಎಂದು ರಂಗ ವಿಜಯಾ ತಂಡದ ಗೌರವ ಅಧ್ಯಕ್ಷೆ ಪಲ್ಲವಿ ಮಣಿ ತಿಳಿಸಿದ್ದಾರೆ.