ವಿಚಾರಧಾರೆ ಅಳವಡಿಸಿಕೊಳ್ಳಿ:ಕೊಪ್ಪಳದ ಕನ್ನಡ ಉಪನ್ಯಾಸಕ ಶಿವಾನಂದ ಮೇಟಿ, ‘ಭಾರತದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಮೊಟ್ಟ ಮೊದಲು ಹೋರಾಡಿದ ಮಹಿಳೆ ಚೆನ್ನಮ್ಮ. ಧೀರ ಮಾತೆಯ ವಿಚಾರಗಳನ್ನು ಅಳವಡಿಸಿಕೊಂಡು ಸಾಗಿದರೆ ದೇಶ ಇನ್ನಷ್ಟು ಬಲಿಷ್ಠವಾಗಲಿದೆ.ಒಬ್ಬ ಮಹಿಳೆಯಲ್ಲಿ ಎಷ್ಟು ಗಟ್ಟಿತನ ಇರುತ್ತದೆಯೋ, ಅಷ್ಟೇ ಹೃದಯವಂತಿಕೆಯೂ ಇರುತ್ತದೆ ಎನ್ನುವುದಕ್ಕೆಚೆನ್ನಮ್ಮ ಉತ್ತಮ ಉದಾಹರಣೆ.ಅವರ ಜಯಂತಿಯನ್ನು ಒಂದು ದಿನ ಆಚರಿಸಿ, ಮರೆಯಬಾರದು’ ಎಂದು ಹೇಳಿದರು.