ಕಚೇರಿಯ ಗಾಜಿಗೆ ‘ರವಿ ಪೂ
ಜಾರಿ’ ಅಕ್ಷರವುಳ್ಳ ಭಿತ್ತಿಪತ್ರ ಅಂಟಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಪೂಜಾರಿಯ ಸಹಚರರು ಎನ್ನಲಾದ ಕವಿರಾಜ್, ಮೋಹನ್, ಶಿವಾ, ಇಬ್ರಾಹಿಂ, ಮಹೇಶ್, ಸಂತೋಷ್ ರೈ,ಪ್ರದೀಪ್,ಆಜಾದ್ ಹಾಗೂ ಉದಯ್ಕುಮಾರ್ ಹೆಗ್ಡೆಯನ್ನು 2009ರಲ್ಲಿ ಸೆರೆ ಹಿಡಿದಿದ್ದರು. ಆದರೆ, ಪೂಜಾರಿ ಸುಳಿವು ಮಾತ್ರ ಸಿಕ್ಕಿರಲಿಲ್ಲ.ಇದೇ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಕುಂದಾಪುರದ ಸುರೇಶ್ ಪೂಜಾರ ಸಹ ತಲೆಮರೆಸಿಕೊಂಡಿದ್ದಾನೆ.