ನೆಲಮಂಗಲ: ‘ಮಾರುಕಟ್ಟೆ ಸ್ಥಿತಿಗತಿ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುವ ಮಾಹಿತಿ, ಟೆಂಡರ್ ಆಹ್ವಾನಗಳು, ವಾಣಿಜ್ಯ ಪುರವಣಿ ಲೇಖನಗಳು ಮತ್ತು ಧರ್ಮಸ್ಥಳ ರುಡ್ಸೆಟ್ ಸಂಸ್ಥೆಯ ಮಾರ್ಗದರ್ಶನದಿಂದ ನಾನು ಯಶಸ್ವಿ ಉದ್ಯಮಿಯಾದೆ’ ಎಂದು ಇಲ್ಲಿನ ಧರ್ಮಸ್ಥಳ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ಸಿಎನ್ಆರ್ ಸಮೂಹದ ಅಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು.