ಸುರಿವ ಮಳೆಯಲ್ಲೇ ಡಾಂಬರೀಕರಣ ಕಾಮಗಾರಿ ನಡೆಸಿದ ಬಗ್ಗೆ ‘ಪ್ರಜಾವಾಣಿ’ ಜೂನ್ 4ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಮಳೆ ಬರುವ ಸಂದರ್ಭದಲ್ಲಿ ಡಾಂಬರೀಕರಣ ನಡೆಸಿದರೆ ಕಾಮಗಾರಿಯ ಗುಣಮಟ್ಟ ಹೇಗೆ ಕಳಪೆ ಆಗಲಿದೆ, ಅದರಿಂದ ರಸ್ತೆಯ ಬಾಳಿಕೆ ಮೇಲೆ ಏನೆಲ್ಲ ದುಷ್ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಸಮೇತ ವಿವರಿಸಿತ್ತು.