‘ಮನೆ ಬಾಡಿಗೆ ಕೇಳಿಕೊಂಡು ಅಪರಿಚಿತರು, ವೆಂಕಟೇಶ್ ಅವರ ಮನೆಗೆ ಬಂದಿದ್ದರು. ಮನೆ ತೋರಿಸುವ ವೇಳೆಯಲ್ಲಿ ವೆಂಕಟೇಶ್ ಅವರನ್ನು ಹಿಂಬದಿಯಿಂದ ಬಿಗಿಯಾಗಿ ಹಿಡಿದಿದ್ದ ಅಪರಿಚಿತರು, ಬಾಯಿಗೆ ಬಟ್ಟೆ ತುರುಕಿ ಚೀರಾಡದಂತೆ ಮಾಡಿದ್ದರು. ಚಾಕುವಿನಿಂದ ಹಲ್ಲೆ ಸಹ ಮಾಡಿದ್ದರು. ‘ಮನೆಯಲ್ಲಿರುವ ಹಣ ಮತ್ತು ಚಿನ್ನಾಭರಣ ಕೊಡು. ಇಲ್ಲದಿದ್ದರೆ ಹತ್ಯೆ ಮಾಡುತ್ತೇವೆ’ ಎಂದು ಆರೋಪಿಗಳು ಬೆದರಿಸಿದ್ದರು’