‘ಪರಿಷತ್ತಿನ ವಜ್ರಮಹೋತ್ಸವ ಕಟ್ಟಡ ಮತ್ತು ಆಡಳಿತ ಕಟ್ಟಡಕ್ಕೆ ಬಣ್ಣ ಹಚ್ಚುವಿಕೆ, ಪಂಪ ಸಭಾಂಗಣ ನವೀಕರಣ, ಅಕ್ಕಮಹಾದೇವಿ ಸಭಾಂಗಣದ ಧ್ವನಿ ತಂತ್ರಜ್ಞಾನ ವ್ಯವಸ್ಥೆ ಸರಿಪಡಿಸುವುದು, ಶತಮಾನೋತ್ಸವ ಭವನದಲ್ಲಿ ಸಾಹಿತಿ ಹಾಗೂ ಕಲಾವಿದರಿಗೆ ಅತಿಥಿಗೃಹ ವ್ಯವಸ್ಥೆ ಕಲ್ಪಿಸುವುದು, ಬಿ.ಎಂ.ಶ್ರೀ. ಅಚ್ಚುಕೂಟ, ಸರಸ್ವತಿ ಗ್ರಂಥ ಭಂಡಾರ, ಪುಸ್ತಕ ಮಾರಾಟ ಕೇಂದ್ರ ಇವುಗಳ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿ, ಗ್ರಂಥಗಳ ಡಿಜಿಟಲೀಕರಣ, ತಂತ್ರಾಂಶ ಅಳವಡಿಕೆ ಮತ್ತು ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯ’ ಎಂದು ಜೋಶಿ ತಿಳಿಸಿದ್ದಾರೆ.