ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಉಪನ್ಯಾಸ ನೀಡಿ, ‘ದೇವರ ದಾಸಿಮಯ್ಯರ ವಚನಗಳನ್ನು ಮರೆತರೆ ಕನ್ನಡದ ವೇದ ಮರೆತಂತೆ. ಹರಿಹರ, ಬಸವಣ್ಣ, ರಾಘವಾಂಕ, ಅನುಭವ ಮಂಟಪದ ವಚನಕಾರರ ಮೇಲೆ ದೇವರ ದಾಸಿಮಯ್ಯ ವಚನಗಳು ಪ್ರಭಾವ ಬೀರಿವೆ. ಇದೂವರೆಗೂ ಅವರ 170 ವಚನಗಳು ದೊರೆತಿವೆ. ಆ ವಚನಗಳನ್ನು ವಿಶ್ವವ್ಯಾಪಿ ಪಸರಿಸ ಬೇಕಾಗಿದೆ. ಕನ್ನಡ ಭಾಷೆಯ ವಚನಗಳನ್ನು ಇಂಗ್ಲಿಷ್, ಹಿಂದಿ ಭಾಷೆಗೆ ಅನುವಾದ ಮಾಡಬೇಕಾಗಿದೆ. ನೇಕಾ
ರರ ಬಗ್ಗೆ ದಾಸಿಮಯ್ಯ ಅವರು ಸಾಕಷ್ಟು ವಚನಗಳನ್ನು ರಚಿಸಿದ್ದಾರೆ’ ಎಂದರು.