‘ನಿವೃತ್ತ ಶಿಕ್ಷಕರಾದ ಹುಲಿಯಪ್ಪ, ಸುಬೇದಾರ್ ಮಸೀದಿ ಬಳಿ ವಾಸವಿದ್ದಾರೆ. ಅವರಿಗೆ ಮಾಲೀಕತ್ವದಲ್ಲಿ ಮನೆಗಳಿದ್ದು, ಅವುಗಳನ್ನು ಬಾಡಿಗೆ ನೀಡಿದ್ದರು. ಅದರಲ್ಲಿ ಒಂದು ಮನೆ ಇತ್ತೀಚೆಗೆ ಖಾಲಿ ಆಗಿತ್ತು. ’ಮನೆ ಬಾಡಿಗೆಗೆ ಇದೆ’ ಎಂದು ಫಲಕ ಹಾಕಿದ್ದರು. ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ಆರೋಪಿಗಳು, ಚಾಕುವಿನಿಂದ ಕತ್ತು ಕೊಯ್ದು ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದರು.’