ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೂರನೇ ಗೇಟ್ ಉದ್ಘಾಟನೆ ಸಮಾರಂಭದಲ್ಲಿ ಶನಿವಾರ ಮೇಯರ್ ಗಂಗಾಂಬಿಕೆ, ‘ರೈಲು ಸಂಚಾರದ ವೇಳೆ ರೈಲ್ವೆ ಸೇತುವೆ ಕೆಳಗೆ ಸಂಚರಿಸುವುದೇ ಕಷ್ಟ. ಸವಾರರ ಮೇಲೆ ಚಲಿಸುವ ರೈಲಿನ ತ್ಯಾಜ್ಯ ನೀರು ಬೀಳುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಿ’ ಎಂದು ಮನವಿ ಮಾಡಿದರು.