‘ಕಾಮಗಾರಿ ನಡೆಯುತ್ತಿರುವುದು ಒಳ್ಳೆಯದೇ. ಆದರೆ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ಆಳವಾದ ಹಳ್ಳವನ್ನು ದಾಟಿ ಇಲ್ಲಿನ ಅಂಗಡಿಗಳಿಗೆ ಸಾರ್ವಜನಿಕರು ಬರಬೇಕಾಗಿದೆ. ಇದೇ ರೀತಿ ಔಷಧ ಕೊಳ್ಳಲು ಬಂದ ವೃದ್ಧರಿಬ್ಬರು ಕಾಲು ಜಾರಿ ಹಳ್ಳಕ್ಕೆ ಬಿದ್ದರು. ಅವರನ್ನು ರಕ್ಷಿಸಲಾಯಿತು. ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಿದರೆ ಎಲ್ಲರಿಗೂ ಅನುಕೂಲ’ ಎಂದು ಮನವಿ ಮಾಡಿದರು.