‘ನಾಗರಬಾವಿಯ ಗಂಗಾಧರಯ್ಯ ಎಂಬುವರುಇದೇ 3ರಂದು ತಡರಾತ್ರಿ ತುಮಕೂರಿನಿಂದ ಗೊರಗುಂಟೆಪಾಳ್ಯಕ್ಕೆ ಬಂದಿದ್ದರು. ತಮ್ಮ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತ ನಿಲ್ದಾಣದಲ್ಲಿ ನಿಂತಿದ್ದರು. ಡ್ರಾಪ್ ನೀಡುವುದಾಗಿ ಅವರನ್ನು ಹತ್ತಿಸಿಕೊಂಡಿದ್ದ ಆರೋಪಿಗಳು, ನಾಯಂಡಹಳ್ಳಿ ಬಳಿ ಚಾಕು ಮತ್ತು ತಲ್ವಾರ್ ತೋರಿಸಿ ಬೆದರಿಸಿದ್ದರು. ಮೊಬೈಲ್, 16 ಗ್ರಾಂ ಚಿನ್ನದ ಉಂಗುರ ದೋಚಿದ್ದರು’ ಎಂದು ಪೊಲೀಸರು ಹೇಳಿದರು.