ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾಪ್ ನೆಪದಲ್ಲಿ ಸುಲಿಗೆ; ನಾಲ್ವರ ಬಂಧನ

Last Updated 11 ನವೆಂಬರ್ 2019, 21:28 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಾಪ್ ನೆಪದಲ್ಲಿ ಸಾರ್ವಜನಿಕರನ್ನು ಟೆಂಪೊದಲ್ಲಿ ಹತ್ತಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬ್ಯಾಟರಾಯನಪುರದ ಸಂದೀಪ್ ಅಲಿಯಾಸ್ ಯಜಮಾನ್ರು, ಅನುಕುಮಾರ್ ಭಂಡಾರಿ, ಮನುಕುಮಾರ್ ಹಾಗೂ ಪೂರ್ಣಚಂದ್ರ ಬಂಧಿತರು.

‘ನಾಗರಬಾವಿಯ ಗಂಗಾಧರಯ್ಯ ಎಂಬುವರುಇದೇ 3ರಂದು ತಡರಾತ್ರಿ ತುಮಕೂರಿನಿಂದ ಗೊರಗುಂಟೆಪಾಳ್ಯಕ್ಕೆ ಬಂದಿದ್ದರು. ತಮ್ಮ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತ ನಿಲ್ದಾಣದಲ್ಲಿ ನಿಂತಿದ್ದರು. ಡ್ರಾಪ್ ನೀಡುವುದಾಗಿ ಅವರನ್ನು ಹತ್ತಿಸಿಕೊಂಡಿದ್ದ ಆರೋಪಿಗಳು, ನಾಯಂಡಹಳ್ಳಿ ಬಳಿ ಚಾಕು ಮತ್ತು ತಲ್ವಾರ್ ತೋರಿಸಿ ಬೆದರಿಸಿದ್ದರು. ಮೊಬೈಲ್, 16 ಗ್ರಾಂ ಚಿನ್ನದ ಉಂಗುರ ದೋಚಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT