ಬೆಂಗಳೂರು: ಮಾರಕಾಸ್ತ್ರಗಳನ್ನು ಹಿಡಿದು ನಗರದಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಂಜಯನಗರದ ಸಂತೋಷ್ಕುಮಾರ್ ಅಲಿಯಾಸ್ ಮೇಕೆ, ಶಶಿಕುಮಾರ್ ಅಲಿಯಾಸ್ ಕುಳ್ಳ, ಆರ್. ಭಾಸ್ಕರ್, ಸ್ಟೀಫನ್ ರಾಜ್ ಹಾಗೂ ಆರ್. ಕುಮಾರ್ ಅಲಿಯಾಸ್ ಬೆಟ್ಟ ಬಂಧಿತರು. ಎಚ್ಎಎಲ್ ಠಾಣೆ ವ್ಯಾಪ್ತಿಯ ಸ್ಮಶಾನ ಬಳಿ ಸೇರಿದ್ದ ಆರೋಪಿ
ಗಳು ಮಾರಕಾಸ್ತ್ರಗಳನ್ನು ಹಿಡಿದು ನಿಂತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.