ಬೆಂಗಳೂರು ಲಿಟಲ್ ಥಿಯೇಟರ್ ಫೌಂಡೇಷನ್ನ ಸಂಚಾಲಕ ವಿಜಯ್ ಪದಕಿ ಮಾತನಾಡಿ, ಅಸಹನೆ ಮತ್ತು ಅಪಕ್ವತೆಯೇ ಗಾಂಧಿ ಮತ್ತುಯಿಟ್ಜ್ಹಾಕ್ ಅವರಂತಹ ನಾಯಕರ ಹತ್ಯೆಗೆ ಕಾರಣ. ಯಾವುದೇ ಒಂದು ವಿಚಾರದ ಬಗೆಗಿನ ಅಸಮ್ಮತಿಯನ್ನು ಸಹಿಸಿಕೊಳ್ಳುವ ಗುಣ ಎಲ್ಲಿಯವರೆಗೆ ಇರುವುದಿಲ್ಲವೋ, ಅಲ್ಲಿಯವರೆಗೆ ಇಂತಹ ದುರ್ಘಟನೆಗಳನ್ನು ತಡೆಯಲು ಆಗುವುದಿಲ್ಲ. ಇತಿಹಾಸದಲ್ಲಿ 200 ಆಡಳಿತಗಾರರು, ಮಹಾನಾಯಕರ ಹತ್ಯೆಗಳು ನಡೆದಿವೆ ಎಂದರು.