ಶನಿವಾರ ರಾತ್ರಿ 9.30 ಸುಮಾರಿಗೆ ಹನುಮಕ್ಕ ಹನುಮಂತಪ್ಪ ಲೇಔಟ್ನ ರೈಲ್ವೆ ಬಡಾವಣೆಯ ಎರಡನೇ ಕ್ರಾಸ್ನಲ್ಲಿ ದಾರಿಹೋಕರ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ, ದರೋಡೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಆರೋಪಿಗಳ ಪೈಕಿ ಜಗದೀಶ, ಅತ್ಯಾಚಾರ ಮತ್ತು ಕೊಲೆ ಯತ್ನದ ಪ್ರಕರಣದ ಆರೋಪಿ. ಸತ್ಯರಾಜ್ ಎಂಬಾತ ಯೋಗಿ ಎಂಬವವನ ಕೊಲೆ ಪ್ರಕರಣದ ಆರೋಪಿ. ದರೋಡೆ ಯತ್ನ ಪ್ರಕರಣವೊಂದರಲ್ಲಿ ರವಿಕಿರಣ್ ಆರೋಪಿ. ಎಲ್ಲರೂ ಉಲ್ಲಾಳ ಕಾರ್ತಿಕ್ನ ಸಹಚರರು ಎಂದು ಪೊಲೀಸರು ತಿಳಿಸಿದರು.