ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ: ದೇಣಿಗೆ ಸಂಗ್ರಹಕ್ಕೆ ಚಾಲನೆ

Last Updated 17 ಜನವರಿ 2021, 1:58 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಕನ್ನಲ್ಲಿ ಮಹಾಂತ ಮಠದ ಶ್ರೀ ರೇಣುಕಾಶಿವಾಚಾರ್ಯ ಸ್ವಾಮೀಜಿ ಕನ್ನಲ್ಲಿಯಲ್ಲಿ ಚಾಲನೆ ನೀಡಿದರು.

ಕನ್ನಲ್ಲಿಯ ಶ್ರೀ ವೀರಭದ್ರಸ್ವಾಮಿ ನಿತ್ಯಾನ್ನ ದಾಸೋಹ ಸಮಿತಿಯ ಅಧ್ಯಕ್ಷ ಡಾ.ಎಸ್.ಶಾಂತರಾಜು ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಅವರು ₹1.11 ಲಕ್ಷ, ಬಿಜೆಪಿ ಮುಖಂಡ ಡಾ.ಎನ್.ನಂಜುಂಡೇಶ್ ಅವರು ₹1 ಲಕ್ಷ ಮೊತ್ತದ ಚೆಕ್‌ ನೀಡಿದರು.

ಆರ್‌ಎಸ್‍ಎಸ್‍ನ ಕಾಂತರಾಜು, ‘ರಾಮಮಂದಿರವು ಒಂದು ಜಾತಿ, ಪಕ್ಷಕ್ಕೆ ಸೀಮಿತವಾಗದೆ ಹಿಂದೂ ಧರ್ಮದ ಸಂಕೇತವಾಗಬೇಕು’ ಎಂದರು.

ಡಾ.ಎನ್.ನಂಜುಂಡೇಶ್, ‘ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಭಾರತೀಯ ಇತಿಹಾಸವನ್ನು ರಕ್ಷಿಸಬೇಕು’ ಎಂದರು.

ಆರ್‌ಎಸ್‍ಎಸ್ ಪ್ರಚಾರಕಿ ಪೂರ್ಣಿಮಾ, ‘ಮಹಿಳೆಯರು ಆರ್‌ಎಸ್‍ಎಸ್ ಸೇರುವ ಮೂಲಕ ಹಿಂದುತ್ವ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದರು.

ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್‍ರಾಜ್, ಸಿದ್ದಲಿಂಗಸ್ವಾಮಿ, ಸುರೇಶ್ ಬಿ.ಪಿ, ಗಂಗರಾಜಮ್ಮ, ಸಾವಿತ್ರಮ್ಮ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT