ಮುರುಘನಾಥಂ ಆರೋಪಿ ಅರ್ಜುನ್, ಇತರರ ವಿರುದ್ಧ ದೂರು ನೀಡಿದ್ದಾರೆ. ‘ಆರೋಪಿ ಕೆಲ ದಿನದ ಹಿಂದೆ ಚೆನ್ನೈಗೆ ಹೋಗಿದ್ದು ದೂರುದಾರರಿಗೆ ‘ಮನೆ ಬಳಿ ನೀರಿನ ಸಂಪ್ ಅಗೆಯುವಾಗ ಚಿನ್ನದ 5 ಮಣಿ ಸಿಕ್ಕಿವೆ. ಅವುಗಳನ್ನು ₹ 25 ಲಕ್ಷಕ ಮಾರುತ್ತೇನೆ ಎಂದು ತಿಳಿಸಿ 2 ಮಣಿ ನೀಡಿದ್ದ. ಪರಿಶೀಲಿಸಿದಾಗ ಅದು ಅಸಲಿ ಚಿನ್ನವಾಗಿತ್ತು.’ ‘ಬೆಂಗಳೂರಿಗೆ ಬಂದರೆ ಮಣಿ ನೀಡುವುದಾಗಿ ಹೇಳಿದ್ದ. ₹ 15 ಲಕ್ಷ ಸಮೇತ ದೂರುದಾರ ಬಂದಿದ್ದರು. ಆಗ ಆರೋಪಿಗಳು ಹಣ ಪಡೆದುಪರಾರಿಯಾಗಿದ್ದರು’ ಎಂದು ತಿಳಿಸಿದ್ದಾರೆ.