ಬೆಂಗಳೂರು: ಕೆಲಸಕ್ಕೆ ಅಡ್ಡಿಪಡಿಸುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆರ್ಟಿಐ ಕಾರ್ಯಕರ್ತ ಕೃಷ್ಣಮೂರ್ತಿಗೌಡ ಎಂಬಾತನ ವಿರುದ್ಧ ಬಿಬಿಎಂಪಿಯ ಕತ್ರಿಗುಪ್ಪೆ ವಾರ್ಡ್–163ರ ಸಹಾಯಕ ಎಂಜಿನಿಯರ್ ಶ್ವೇತಾ ದೂರು ನೀಡಿದ್ದಾರೆ. ಆರೋಪಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.