‘ಸದಸ್ಯರಾಗಿ ನೇಮಕಗೊಳ್ಳುವವರು ವಾಣಿಜ್ಯ ವಿಷಯಗಳು ಮತ್ತು ಆಡಳಿತದಲ್ಲಿ ಅನುಭವ ಹೊಂದಿರಬೇಕು. ಆದರೆ, ರುದ್ರೇಗೌಡ ಅವರು ಸಹಾಯಕ ಮಾರಾಟ ಅಧಿಕಾರಿಯಾಗಿದ್ದರೆ ವಿನಾ ವಾಣಿಜ್ಯ ವಿಷಯಗಳಲ್ಲಿ, ಆಡಳಿತಾತ್ಮಕ ವಿಷಯಗಳಲ್ಲಿ ಅನುಭವ ಹೊಂದಿಲ್ಲ. ಅಲ್ಲದೆ, ಸಿವಿಲ್ ಎಂಜಿನಿಯರಿಂಗ್ ಕಾಮಗಾರಿಗಳಲ್ಲಿ ಅನುಭವ ಹೊಂದಿರಬೇಕು. ಎಂಜಿನಿಯರಿಂಗ್ ಹುದ್ದೆ ನಿಭಾಯಿಸಿದ ಅನುಭವವೂ ರುದ್ರೇಗೌಡ ಅವರಿಗೆ ಇಲ್ಲ. ಸರ್ಕಾರ ಈ ನೇಮಕವನ್ನು ಕೂಡಲೇ ರದ್ದು ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.