‘ಮಂಜುನಾಥ್ ಅವರ ಹೆಸರಿನಲ್ಲಿ ಕೆಲ ಮನೆಗಳಿದ್ದು, ಅವುಗಳನ್ನು ಬಾಡಿಗೆಗೆ ನೀಡಲಾಗಿದೆ. ಮನೆ ಬಾಡಿಗೆಯ ಸಂಪೂರ್ಣ ಹಣವನ್ನು ತನಗೆ ನೀಡುವಂತೆ ಉತ್ತಮ್ಕುಮಾರ್ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ತಂದೆಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ. ಬಾಡಿಗೆದಾರ ಮನೋಹರ್ ಬಳಿ ಹೋಗಿದ್ದ ಆರೋಪಿ, ತನಗೇ ಬಾಡಿಗೆ ನೀಡುವಂತೆ ತಾಕೀತು ಮಾಡಿದ್ದ. ಅವರಿಗೂ ಮಾರಕಾಸ್ತ್ರ ತೋರಿಸಿದ್ದ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.