ಈ ಮೊದಲು ಉದ್ದೇಶಿಸಿದ್ದ ಬಸ್ ಆದ್ಯತಾ ಮಾರ್ಗದಲ್ಲಿಯೇ ಈ ಮೆಟ್ರೊ ಮಾರ್ಗವೂ ನಿರ್ಮಾಣವಾಗಲಿದೆ. ಬಸ್ ಆದ್ಯತಾ ಪಥದ ಮಧ್ಯದ ಭಾಗದಲ್ಲಿ ಅಂದರೆ ಮೀಡಿಯನ್ನಲ್ಲಿರುವ ಮರಗಳು ಈ ಯೋಜನೆಗೆ ಬಲಿಯಾಗಲಿವೆ. ಇವು ಬಹುತೇಕ ಸಣ್ಣ ಮರಗಳಾಗಿದ್ದು, ಕಡಿಯಬೇಕಾದ ಮರಗಳನ್ನು ಬಿಎಂಆರ್ಸಿಎಲ್ ಈಗಾಗಲೇ ಗುರುತಿಸಿದೆ ಎನ್ನಲಾಗಿದೆ. ಆದರೆ, ಬಿಬಿಎಂಪಿಯ ಅರಣ್ಯ ವಿಭಾಗದಿಂದ ಅನುಮತಿ ಸಿಗಬೇಕಿದೆ ಎಂದು ಮೂಲಗಳು ಹೇಳಿವೆ.