ಬೆಂಗಳೂರು: ಸಾಮರಸ್ಯ ವೇದಿಕೆಯ ರಾಜ್ಯ ಘಟಕವು ‘ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು’ (Various efforts to achieve Social Harmony) ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ಕನ್ನಡ ಮತ್ತು ಇಂಗ್ಲಿಷ್ನಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ 18 ರಿಂದ 30 ವರ್ಷದ ಒಳಗಿನ ಯುವಕ-ಯುವತಿಯರು ಪಾಲ್ಗೊಳ್ಳಬಹುದು. ಪ್ರಥಮ ₹10 ಸಾವಿರ, ದ್ವಿತೀಯ ₹7,500, ತೃತೀಯ ₹5,000 ಹಾಗೂ ಹತ್ತು ಜನರಿಗೆ ತಲಾ ₹1 ಸಾವಿರ ನಗದು ಬಹುಮಾನ ನಿಗದಿ ಪಡಿಸಲಾಗಿದೆ.
ಪದಗಳು ಮಿತಿ 1,500. ಪ್ರಬಂಧಗಳನ್ನು essaysamarasyavedike@gmail.com ಗೆ ಜುಲೈ 25ರೊಳಗೆ ಪ್ರಬಂಧಗಳನ್ನು ಕಳುಹಿಸಬೇಕು ಎಂದು ವೇದಿಕೆಯ ಪ್ರಾಂತ ಸಂಯೋಜಕ ಲಕ್ಷ್ಮೀನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.