‘ರಿಯಾಜುದ್ದೀನ್ ಎಂಬುವರಿಗೆ ಸೇರಿದ್ದ ನಾಗರಹೊಳೆಯಲ್ಲಿರುವ ಫಾರ್ಮ್ಹೌಸ್ಗೆ ಹೋಗಿದ್ದ ಸಂಪತ್ರಾಜ್, ಅಲ್ಲಿಯೇ ಕೆಲ ದಿನ ತಂಗಿದ್ದರು. ನಂತರ ತಮಿಳುನಾಡಿಗೆ ಹೋಗಿದ್ದರು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸೇರಿದ್ದ ಜಾಗಗಳಲ್ಲಿ ಉಳಿದುಕೊಂಡಿದ್ದರು. ವೆಲ್ಲೂರು ಸೇರಿದಂತೆ ಹಲವು ದೇವಸ್ಥಾನಗಳಿಗೆ ಹೋಗಿದ್ದರು. ದೀಪಾವಳಿ ಹಬ್ಬಕ್ಕೆ ಬೆಂಗಳೂರಿನ ಮನೆಗೆ ಬಂದಿದ್ದಾಗಲೇ ಅವರನ್ನು ಬಂಧಿಸಲಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.