ಭಾರತ ಯಾತ್ರಾ ಕೇಂದ್ರ ಹಾಗೂ ರಂಗಸೌರಭ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸೌರಭ 2023 ಸಮಾರಂಭದಲ್ಲಿ ಗಣೇಶ್ ಪಿ.ಬಿ. ಹಾಗೂ ಶಶಿಕಲಾ ಎನ್. ಅವರಿಗೆ ‘ಸಂಸ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ‘ಈ ಹಿಂದೆ ರಂಗಭೂಮಿಯಲ್ಲಿ ಅವಕಾಶ ಪಡೆಯುವುದು ಕಷ್ಟವಾಗಿತ್ತು. 1980ರಲ್ಲಿ ಸಂಸ ರಂಗಮಂದಿರದಲ್ಲಿ ‘ಮುಖ್ಯಮಂತ್ರಿ’ ನಾಟಕವನ್ನು ಪ್ರಥಮ ಬಾರಿಗೆ ಪ್ರದರ್ಶಿಸಿದೆ. ಈಗ ಆ ನಾಟಕ 800 ಪ್ರದರ್ಶನಗಳು ಆಗಿವೆ. ಕೈ–ಕಾಲುಗಳು ಗಟ್ಟಿ ಇರುವವರೆಗೂ ನಾಟಕ ಪ್ರದರ್ಶನ ಮಾಡುತ್ತೇನೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿದರೂ ರಂಗಭೂಮಿಯನ್ನು ಬಿಟ್ಟಿಲ್ಲ. ಆಧುನಿಕ ಯುಗದಲ್ಲಿ ಆರ್ಥಿಕ ಭದ್ರತೆಯಿಂದ ಕೆಲವರು ಮೂಲ ಕಲೆಯನ್ನು ಮರೆಯುತ್ತಾರೆ’ ಎಂದು ಹೇಳಿದರು.