ಪೀಣ್ಯ ದಾಸರಹಳ್ಳಿ: ಕೋವಿಡ್ ಲಸಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ರಾಷ್ಟ್ರಧ್ವಜದಲ್ಲಿ 7 ಅಡಿಯ ಕೊರೊನಾ ಲಸಿಕೆಯ ಬಾಟಲಿ ಮತ್ತು ಇಂಜೆಕ್ಷನ್ ಮಾದರಿಯನ್ನು ರೂಪಿಸುವ ಮೂಲಕ ವಿಭಿನ್ನವಾಗಿ ಗಣರಾಜ್ಯೋತ್ಸವ ಆಚರಿಸಿತು.
72 ಉದ್ದದ ತ್ರಿವರ್ಣ ಧ್ವಜವನ್ನು ರೂಪಿಸಿ, ಜಾಗೃತಿ ಆಂದೋಲನ ನಡೆಸಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ದೇಶೀಯ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಶ್ಲಾಘಿಸಿದೆ. ಆದರೆ, ಲಸಿಕೆ ಕುರಿತು ನಮ್ಮಲ್ಲಿ ಅಪಪ್ರಚಾರ ನಡೆಯುತ್ತಿದೆ. ಆ ತಪ್ಪು ಕಲ್ಪನೆ ನಿವಾರಣೆಯಾಗಬೇಕು ಎಂದು ಈ ರೀತಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ಮುಖ್ಯ ಪ್ರಾಚಾರ್ಯರಾದ ಡಾ. ಜಯಂತಿ ಹೇಳಿದರು.