ಬೆಂಗಳೂರು: ನಗರದಸಪ್ತಗಿರಿ ಆಸ್ಪತ್ರೆಯು ಬಿಪಿಎಲ್ ಕುಟುಂಬದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, ಇಬ್ಬರಿಗೆ ತೆರೆದ ಹೃದಯದ ಕೀ ಹೋಲ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ಚಿಕಿತ್ಸೆಗೆ ₹6 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ. ಇದರಿಂದಾಗಿ ಬಡವರಿಗೆ ಈ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟ. ಹೀಗಾಗಿ, ಆಸ್ಪತ್ರೆ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಿದೆ. ಸರ್ಕಾರಿ ವಿಮಾ ಸೌಲಭ್ಯ ಹೊಂದಿರುವವರು ಇದರ ಲಾಭ ಪಡೆದುಕೊಳ್ಳಬಹುದು ಎಂದು ಘೋಷಿಸಿದೆ.
ಚಿಕ್ಕಬಾಣಾವರದ ರಾಜೇಶ್ (24) ಎಂಬುವರಿಗೆ ಹೃದಯದ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಉಚಿತವಾಗಿ ಮಾಡಿದ್ದಾರೆ.ಪಶ್ಚಿಮ ಬಂಗಾಳದ ರೈತ ಭರತ್ (60) ಎಂಬುವರಿಗೆ ಇದೇ ತಂತ್ರಜ್ಞಾನ ಬಳಸಿ, ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.