‘ರೇಷ್ಮೆ ಸೀರೆ ಮಾರಾಟ ಮಾಡುವುದಾಗಿ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದೆ. ಅದನ್ನು ನೋಡಿ ಇದೇ 16ರಂದು ಕರೆ ಮಾಡಿದ್ದ ಶಶಿಕಲಾ, ‘ದೇವನಹಳ್ಳಿಯಲ್ಲಿ ನಮ್ಮದು ಅಂಗಡಿ ಇದೆ. 300 ವಿವಿಧ ವಿನ್ಯಾಸಗಳ ರೇಷ್ಮೆ ಸೀರೆಗಳು ಬೇಕು. ಕೇಳಿದಷ್ಟು ಹಣ ನೀಡುತ್ತೇವೆ’ ಎಂದಿದ್ದರು. ಅದನ್ನು ನಂಬಿ, ಇದೇ 19ರಂದು ಹಿರಾನಂದಿನಿ ಅಪಾರ್ಟ್ಮೆಂಟ್ ಸಮುಚ್ಚಯ ಬಳಿ ಹೋಗಿ ₹ 31.98 ಲಕ್ಷ ಮೌಲ್ಯದ ಸೀರೆ ಕೊಟ್ಟಿದ್ದೆ’ ಎಂದುವೆಂಕಟೇಶ್ವರಲು ದೂರಿನಲ್ಲಿ ತಿಳಿಸಿದ್ದಾರೆ.