ನನ್ನ ಒಪ್ಪಿಗೆ ಇಲ್ಲದೇ ಅದ್ಹೇಗೆ ಗೋಷ್ಠಿಗೆ ಸೇರಿಸಿಕೊಳ್ಳಲಾಯಿತು ಎಂಬುದನ್ನು ಆಯೋಜಕರೇ ಸ್ಪಷ್ಟಪಡಿಸಬೇಕು. ಈಗಾಗಲೇ ದಸರಾ ಕವಿಗೋಷ್ಠಿಗಳಲ್ಲಿ ಮೂರು ಸಲ ಭಾಗವಹಿಸಿದ್ದೇನೆ. ಒಂದು ಸಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. ಒಪ್ಪಿಗೆ ಇಲ್ಲದ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ಆತ್ಮವಂಚನೆಯಾಗುತ್ತದೆ ಎಂದಿದ್ದಾರೆ.