ಬೆಂಗಳೂರು: ಜನತಾ ಕರ್ಫ್ಯೂ ವೇಳೆ ಹೆಚ್ಚಿನವರು ಮನೆಯಲ್ಲಿ ಕಾಲ ಕಳೆಯಲು ಚಡಪಡಿಸುತ್ತಿದ್ದರೆ, ಪರಿಸರ ಪ್ರೇಮಿಗಳು ಈ ಸಮಯವನ್ನು ಸದುದ್ದೇಶಕ್ಕೆ ಬಳಸಿಕೊಂಡರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್ಜೆಡ್) 100 ಚದರ ಕಿ.ಮೀ.ಗಳಷ್ಟು ಕಡಿತ ಮಾಡಿರುವ ನಿರ್ಧಾರ ಹಿಂಪಡೆಯಿರಿ ಎಂದು ಸರ್ಕಾರವನ್ನು ಒತ್ತಾಯಿಸಿದರು.