‘ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದೇವನಹಳ್ಳಿ ಭೂ ಸಮಸ್ಯೆ ವಿಶೇಷ ಕಾರ್ಯಸೂಚಿ ಆಗಬೇಕು. ದೇವನಹಳ್ಳಿಯ ಮೂಲಕವೇ ನಂದಿಬೆಟ್ಟಕ್ಕೆ ಹೋಗುವ ಸಚಿವರು ಬರಿಗೈಯಲ್ಲಿ ಬಾರದಿರಲಿ’ ಎಂದು ಮುಖಂಡರು ಮನವಿ ಮಾಡಿದರು. ‘ದೇವನಹಳ್ಳಿ ವಿವಾದದ ನಿಜವಾದ ಚಿತ್ರಣ ಬಹುತೇಕ ಸಚಿವರು ಮತ್ತು ಶಾಸಕರಿಗೆ ಸ್ಪಷ್ಟವಾಗಿಲ್ಲ. ಹಾಗಾಗಿ ಹೋರಾಟಗಾರರು ಆಯಾ ಜಿಲ್ಲೆಗಳ ಸಚಿವರು ಮತ್ತು ಶಾಸಕರನ್ನು ಭೇಟಿಯಾಗಿ ಮಾಹಿತಿ ನೀಡಿ ರೈತಪರ ನಿಲುವು ತೆಗೆದುಕೊಳ್ಳುವಂತೆ ಮನವೊಲಿಸಲು ಕೋರಿದರು.