‘ಇತ್ತೀಚೆಗಷ್ಟೇ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಸೀಸನ್ 2 ನಡೆದಿದೆ. ಆ ಕಾರ್ಯಕ್ರಮದಲ್ಲಿ ಕಲಾವಿದರೊಬ್ಬರು, ಕೊಕ್ಕೆ ಕೊರಮ ಜಾತಿಯನ್ನು ನಿಂದಿಸುವ ಮಾತುಗಳನ್ನಾಡಿದ್ದಾರೆ. ಆ ಸಂಭಾಷಣೆಯಿಂದ ಹಲವರಿಗೆ ನೋವಾಗಿದ್ದು, ಈ ಸಂಗತಿಯನ್ನು ನಂದೀಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.