ಹಗರಣ ಬೆಳಕಿಗೆ ಬಂದಾಗಿನಿಂದ ಸಂಸ್ಥೆ ನೇಮಕ ಮಾಡಿದ್ದ 70 ಶಿಕ್ಷಕರು ಶಾಲೆಗೆ ಬರುವುದನ್ನು ನಿಲ್ಲಿಸಿದ್ದರು. ಇದರಿಂದ ಪೋಷಕರು ಆತಂಕಗೊಂಡಿದ್ದರು. ಪ್ರತಿಭಟನೆಗಳು ಸಹ ನಡೆದಿದ್ದವು. ಎಲ್ಕೆಜಿ, ಯುಕೆಜಿಗೆ ಪ್ರವೇಶಾತಿಯನ್ನೂ ತಡೆಹಿಡಿಯಲಾಗಿತ್ತು. ನಿತ್ಯ ಭದ್ರತೆ ಕಲ್ಪಿಸಿ ಶಾಲೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.