ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ತಂದೆ, ‘ನಾನು ಮನೆಗೆ ಬಂದಾಗ ಮಗನ ಕೆನ್ನೆಯ ಭಾಗದಲ್ಲಿ ಕೈ ಬೆರಳಿನಿಂದ ಹೊಡೆದ ಗುರುತುಗಳು ಕಾಣಿಸಿದ್ದವು. ತಕ್ಷಣ ಶಾಲೆಯ ಪ್ರಾಂಶುಪಾಲರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರೂ ಆಸ್ಪತ್ರಗೆ ಬಂದರು. ಈ ಬಗ್ಗೆ ವೈದ್ಯಕೀಯ– ಕಾನೂನು ಪ್ರಕರಣ ದಾಖಲಿಸುವುದಾಗಿ ತಿಳಿಸಿದಾಗ ಪ್ರಾಂಶುಪಾಲರು ನಮ್ಮನ್ನು ನಿಂದಿಸಿದರು. ಬಳಿಕ ಮಗನನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆದುಕೊಂಡು ಹೋದೆವು’ ಎಂದರು.