ರಾಜ್ಯದಲ್ಲಿರುವ ಗೋಮಾಳ ಒಳಗೊಂಡಂತೆ ವ್ಯವಸಾಯಯೋಗ್ಯ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಿ, ಅದರಿಂದ ಬರುವ ಹಣದಿಂದ ರೈತರ ಸಾಲವನ್ನು ತೀರಿಸುವುದು ಒಂದು ಪರಿಹಾರ. ಬಳಕೆಯೇ ಆಗದಿರುವ ಲಕ್ಷಾಂತರ ಎಕರೆ ಭೂಮಿ ರಾಜ್ಯದಲ್ಲಿದೆ. ಅದನ್ನು ಫಲವತ್ತತೆಯ ಆಧಾರದಲ್ಲಿ 3 ವಿಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗಕ್ಕೂ ದರ ನಿಗದಿಮಾಡಿ ಮೂರು ವರ್ಷಗಳಿಗೆ ಗುತ್ತಿಗೆ ನೀಡುವುದರಿಂದ ರೈತರ ಸಾಲವೂ ತೀರುತ್ತದೆ. ಉತ್ಪಾದ
ನೆಯೂ ಅಧಿಕವಾಗಿ ರಾಜ್ಯಕ್ಕೆ ಒಳ್ಳೆಯದಾಗುತ್ತದೆ.