‘ಸನಾತನ ಹಿಂದೂ ಧರ್ಮದಲ್ಲಿ ದಹನ ಕ್ರಿಯೆಗೆ ಒಳಪಡುವ ಜನಾಂಗಗಳಲ್ಲಿ ವ್ಯಕ್ತಿಯು ಮೃತನಾದರೆ ಉತ್ತರ ಕ್ರಿಯಾದಿಗಳನ್ನು ಮಾಡಬೇಕು. ದಹನ ಕ್ರಿಯೆ ನಡೆಸಿ ಅಸ್ಥಿಯನ್ನು ಪುಣ್ಯ ನದಿಯಾದ ಕಾವೇರಿಯಲ್ಲಿ ವಿಸರ್ಜನೆ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆಗೆ ಸ್ಥಳೀಯರು ತಡೆಯೊಡ್ಡುತ್ತಿದ್ದಾರೆ. ಜೊತೆಗೆ, ಅಲ್ಲಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಇದರಿಂದ ಮೃತರ ಕುಟುಂಬದವರಿಗೆ ನೋವಾಗುತ್ತಿದೆ’ ಎಂದೂ ತಿಳಿಸಿದ್ದಾರೆ.