<p><strong>ಬೆಂಗಳೂರು</strong>: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ಮಾಟ– ಮಂತ್ರದ ಸಾಮಗ್ರಿಗಳಿದ್ದ ಪೆಟ್ಟಿಗೆಯೊಂದನ್ನು ಕೊರಿಯರ್ ಮೂಲಕ ಕಳುಹಿಸಿ ಆತಂಕ ಸೃಷ್ಟಿಸಿದ್ದ ಸ್ವಯಂ ಘೋಷಿತ ದೇವ ಮಾನವನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.</p>.<p>ನೆದರ್ಲೆಂಡ್ ದೇಶದ ಪ್ರಜೆ ಸುಭಾಷ್ ಜೈ ಅಜೀಜ್ (65) ಬಂಧಿತ.</p>.<p>‘ಸುಭಾಷ್ ಜೈ ಅಜೀಜ್ ಅವರ ಪೂರ್ವಜರು ಭಾರತದವರು. ಹಲವು ವರ್ಷಗಳ ಹಿಂದೆಯೇ ನೆದರ್ಲೆಂಡ್ಗೆ ಹೋಗಿ ನೆಲಸಿದ್ದರು. ಸುಭಾಷ್ ಪೂರ್ವಜರು ಆ ದೇಶದ ಪೌರತ್ವ ಪಡೆದುಕೊಂಡಿದ್ದರು. ಸುಭಾಷ್ ಸಹ ನೆದರ್ಲೆಂಡ್ ದೇಶದ ಪ್ರಜೆ’ ಎಂದು ಪೊಲೀಸರು ತಿಳಿಸಿದರು.</p>.<p>ಕೆಲವು ತಿಂಗಳ ಹಿಂದೆ ಸುಭಾಷ್ ಜೈ ಅಜೀಜ್ ಅವರು ನೆದರ್ಲೆಂಡ್ನಿಂದ ಉತ್ತರ ಪ್ರದೇಶಕ್ಕೆ ಬಂದಿದ್ದರು. ನಂತರ ಅಲ್ಲಿಂದ ವಿಮಾನದಲ್ಲಿ ಕೆಐಎಎಲ್ಗೆ ಬಂದಿದ್ದರು. ಹೂವಿನ ಹಾರ, ಅರಿಶಿನ ಕುಂಕುಮ, ಕಬ್ಬು, ಕೆಲವು ದೇವರ ಫೋಟೊಗಳು, ಕಬ್ಬಿಣದ ರಾಡುಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ವಿಮಾನ ನಿಲ್ದಾಣದ ಬಳಿಯ ಅಂಚೆ ಕಚೇರಿಯಿಂದ ಕೆಐಎಎಲ್ ಸಿಇಒ ಹೆಸರಿಗೆ ಕೊರಿಯರ್ ಮೂಲಕ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.</p>.<p>ವಿಮಾನ ನಿಲ್ದಾಣದ ಸಿಬ್ಬಂದಿ, ಆ ಪೆಟ್ಟಿಗೆಯನ್ನು ಪರಿಶೀಲಿಸಿದಾಗ ಮಾಟ–ಮಂತ್ರದ ಸಾಮಗ್ರಿಗಳು ಇರುವುದು ಪತ್ತೆ ಆಗಿತ್ತು. ಅದನ್ನು ಕಂಡ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅವರು ಪೊಲೀಸರಿಗೆ ದೂರು ನೀಡಿದ್ದರು ಎಂದು ಮೂಲಗಳು ಹೇಳಿವೆ.</p>.<p>ಅಂಚೆ ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಯ ಸುಳಿವು ಲಭಿಸಿತ್ತು. ಹೈದರಾಬಾದ್ನ ಲಾಡ್ಜ್ನಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ದುರಂತಗಳು ಸಂಭವಿಸದಿರಲೆಂದು ಪೂಜೆ ಮಾಡಿ ಪಾರ್ಸೆಲ್ ಕಳುಹಿಸಿದ್ದೇನೆಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ಮಾಟ– ಮಂತ್ರದ ಸಾಮಗ್ರಿಗಳಿದ್ದ ಪೆಟ್ಟಿಗೆಯೊಂದನ್ನು ಕೊರಿಯರ್ ಮೂಲಕ ಕಳುಹಿಸಿ ಆತಂಕ ಸೃಷ್ಟಿಸಿದ್ದ ಸ್ವಯಂ ಘೋಷಿತ ದೇವ ಮಾನವನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.</p>.<p>ನೆದರ್ಲೆಂಡ್ ದೇಶದ ಪ್ರಜೆ ಸುಭಾಷ್ ಜೈ ಅಜೀಜ್ (65) ಬಂಧಿತ.</p>.<p>‘ಸುಭಾಷ್ ಜೈ ಅಜೀಜ್ ಅವರ ಪೂರ್ವಜರು ಭಾರತದವರು. ಹಲವು ವರ್ಷಗಳ ಹಿಂದೆಯೇ ನೆದರ್ಲೆಂಡ್ಗೆ ಹೋಗಿ ನೆಲಸಿದ್ದರು. ಸುಭಾಷ್ ಪೂರ್ವಜರು ಆ ದೇಶದ ಪೌರತ್ವ ಪಡೆದುಕೊಂಡಿದ್ದರು. ಸುಭಾಷ್ ಸಹ ನೆದರ್ಲೆಂಡ್ ದೇಶದ ಪ್ರಜೆ’ ಎಂದು ಪೊಲೀಸರು ತಿಳಿಸಿದರು.</p>.<p>ಕೆಲವು ತಿಂಗಳ ಹಿಂದೆ ಸುಭಾಷ್ ಜೈ ಅಜೀಜ್ ಅವರು ನೆದರ್ಲೆಂಡ್ನಿಂದ ಉತ್ತರ ಪ್ರದೇಶಕ್ಕೆ ಬಂದಿದ್ದರು. ನಂತರ ಅಲ್ಲಿಂದ ವಿಮಾನದಲ್ಲಿ ಕೆಐಎಎಲ್ಗೆ ಬಂದಿದ್ದರು. ಹೂವಿನ ಹಾರ, ಅರಿಶಿನ ಕುಂಕುಮ, ಕಬ್ಬು, ಕೆಲವು ದೇವರ ಫೋಟೊಗಳು, ಕಬ್ಬಿಣದ ರಾಡುಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ವಿಮಾನ ನಿಲ್ದಾಣದ ಬಳಿಯ ಅಂಚೆ ಕಚೇರಿಯಿಂದ ಕೆಐಎಎಲ್ ಸಿಇಒ ಹೆಸರಿಗೆ ಕೊರಿಯರ್ ಮೂಲಕ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.</p>.<p>ವಿಮಾನ ನಿಲ್ದಾಣದ ಸಿಬ್ಬಂದಿ, ಆ ಪೆಟ್ಟಿಗೆಯನ್ನು ಪರಿಶೀಲಿಸಿದಾಗ ಮಾಟ–ಮಂತ್ರದ ಸಾಮಗ್ರಿಗಳು ಇರುವುದು ಪತ್ತೆ ಆಗಿತ್ತು. ಅದನ್ನು ಕಂಡ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅವರು ಪೊಲೀಸರಿಗೆ ದೂರು ನೀಡಿದ್ದರು ಎಂದು ಮೂಲಗಳು ಹೇಳಿವೆ.</p>.<p>ಅಂಚೆ ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಯ ಸುಳಿವು ಲಭಿಸಿತ್ತು. ಹೈದರಾಬಾದ್ನ ಲಾಡ್ಜ್ನಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ದುರಂತಗಳು ಸಂಭವಿಸದಿರಲೆಂದು ಪೂಜೆ ಮಾಡಿ ಪಾರ್ಸೆಲ್ ಕಳುಹಿಸಿದ್ದೇನೆಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>