ಬೆಂಗಳೂರು: ‘ರಾಜಕಾರಣಿಗಳುಶಿಕ್ಷಣತಜ್ಞರ ಅಭಿಪ್ರಾಯ ಪಡೆಯದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಮತ ಪಡೆಯುವ ಉದ್ದೇಶದಿಂದ ಇಂಗ್ಲಿಷ್ ಶಾಲೆ ತೆರೆಯುವುದಾಗಿ ಹೇಳಿ, ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಮತಕ್ಕಾಗಿ ಅವರು ಭಾಷೆಯನ್ನೂ ಬಳಸಿಕೊಳ್ಳುತ್ತಿದ್ದಾರೆ’ ಎಂದು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ವಿಷಾದಿಸಿದರು.