<p><strong>ಬೆಂಗಳೂರು</strong>: ‘ಬದುಕು ಕಟ್ಟಿಕೊಟ್ಟ ಗೋಡೆಯೇ ಜೀವ ಕಿತ್ತುಕೊಂಡು ಬಿಟ್ಟಿತು’... </p><p>ನಗರದ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹಿಂಭಾಗದ ಗೋಡೆ ಕುಸಿದ ಘಟನೆಯಲ್ಲಿ, ಸ್ವಲ್ಪದರಲ್ಲೇ ಬದುಕುಳಿದ ಸುಲೇಮಾನ್ಖಾನ್ (78) ಅವರ ಮಾತಿದು.</p><p>ಬೌರಿಂಗ್ ಆಸ್ಪತ್ರೆಯ ಹಿಂಭಾಗದಲ್ಲಿ ರುವ ಮೀನಾಕ್ಷಿ ಗುಡಿ ಬೀದಿ ಸದಾ ಗಿಜಿಗುಡುವ ಸ್ಥಳ. ಒಂದೆಡೆ ರಸೆಲ್ ಮಾರ್ಕೆಟ್, ಸೇಂಟ್ ಬೆಸಿಲಿಕಾ ಚರ್ಚ್, ಗುಜರಿ ಬೀದಿಗೆ ಸಂಪರ್ಕ ಕಲ್ಪಿಸುವ ಮೀನಾಕ್ಷಿ ಗುಡಿ ಬೀದಿಯಲ್ಲಿ ಖರೀದಿಗೆ ಸಿಗದಿರುವ ವಸ್ತುವೇ ಇಲ್ಲ.</p><p>ಅಂತಹ ಅಂಗಡಿಗಳಿಗೆಲ್ಲಾ ಬೌರಿಂಗ್ ಆಸ್ಪತ್ರೆಯ ಹಿಂಭಾಗದ ಗೋಡೆಯೇ ಆಸರೆ.</p><p>ಅಂಗಡಿಗಳೆಂದರೆ ಅಂಗಡಿಗಳಲ್ಲ. ಆಸ್ಪತ್ರೆಯ ಕೌಂಪೌಂಡ್ಗೆ ಆತು ನಿಂತೋ ಅಥವಾ ಕುಳಿತೋ ನಾಲ್ಕಾರು ಬಟ್ಟೆ, ಷೂ, ಚಪ್ಪಲಿ, ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡುವುದು.</p><p>‘ಚರ್ಚ್ಗೆ ಬರುವ ಮಕ್ಕಳಿಗೆ ಆಟಿಕೆ ಮಾರುತ್ತಿದ್ದೆ. 50–60 ವರ್ಷಗಳಾಗಿರಬಹುದೇನೋ. ಆಗಿನಿಂದಲೂ ಇಲ್ಲಿಯೇ ಅಂಗಡಿ ಇಡುತ್ತಿದ್ದೇನೆ. ಬಟ್ಟೆಯ ಹ್ಯಾಂಗರ್, ಆಟಿಕೆ ಸ್ಟ್ಯಾಂಡ್ ಒರಗಿಸಿ ಇಡುತ್ತಿದ್ದು, ಕಡೆಗೆ ಮಳೆ–ಬಿಸಿಲಿನಿಂದ ರಕ್ಷಿಸಲು ಟಾರ್ಪಲ್ ಕಟ್ಟಿಕೊಳ್ಳುತ್ತಿದ್ದದ್ದು ಇದೇ ಗೋಡೆಗೆ’ ಎಂದು ಸುಲೇಮಾನ್ ದೀರ್ಘ ಉಸಿರು ಎಳೆದುಕೊಂಡರು.</p><p>ಬುಧವಾರ ಸಂಜೆಯವರೆಗೂ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಮಧ್ಯಾಹ್ನದ ನಂತರ ಮೋಡ ಇದ್ದುದ್ದರಿಂದ ಯಾರೂ ಟಾರ್ಪಲ್ ಬಿಚ್ಚಿರಲಿಲ್ಲ. ಮಕ್ಕಳ ಫ್ರಾಕ್ ಮಾರುವ ಸಿಜಿ ಮಾತ್ರ ಟಾರ್ಪಲ್ ಹರಡಿ ಅದರಡಿಯಲ್ಲಿ ನಿಂತಿದ್ದರು. </p><p>‘ಸಿಜಿಯ ಟಾರ್ಪಲ್ ಹರಿದುಹೋಗಿತ್ತು. ಕಳೆದ ವಾರವಷ್ಟೇ 700 ರೂಪಾಯಿ ಕೊಟ್ಟು ಟಾರ್ಪಲ್ ಹಾಕಿಸಿದ್ದ. ಬುಧವಾರವಾದ್ದರಿಂದ ಅಂಥ ವ್ಯಾಪಾರವೇನೂ ಇರಲಿಲ್ಲ. ಸಂಜೆ ಹೊತ್ತಿಗೆ ಮಳೆ ಹನಿಯಲಾರಂಭಿಸಿತು. ನನಗೆ ಟಾರ್ಪಲ್ ಇಲ್ಲದ್ದರಿಂದ ಆಟಿಕೆಗಳನ್ನು ಚೀಲಕ್ಕೆ ತುಂಬುತ್ತಿದ್ದೆ. ಮಳೆ ಜೋರಾದ ಕಾರಣ. ಅಕ್ಕಪಕ್ಕದವರೆಲ್ಲಾ ತಮ್ಮ ಚೀಲ ಎತ್ತಿಕೊಂಡು ಸಿಜಿಯ ಟಾರ್ಪಲ್ ಅಡಿಗೆ ಹೋದರು. ನನಗೆ ಜಾಸ್ತಿ ವಯಸ್ಸು. ಬೇಗ ಹೋಗಲು ಆಗಲಿಲ್ಲ. ಎದ್ದು ಅತ್ತ ಹೋಗಬೇಕು ಎನ್ನುವಷ್ಟರಲ್ಲೇ ಗೋಡೆ ಬಿತ್ತು. ಸಿಜಿಯ ಟಾರ್ಪಲ್ ಅಡಿ ನಿಂತಿದ್ದವರು ಗೋಡೆ ಕೆಳಗೆ ಸಿಕ್ಕಿಕೊಂಡರು’ ಎಂದು ಮೌನಕ್ಕೆ ಜಾರಿದರು.</p><p>ಆ ಹೊತ್ತಿಗೆ ಅಲ್ಲಿಗೆ ಬಂದ ಯುವಕನೊಬ್ಬ, ‘ಅಬ್ಬು, ಬಾ. ನೋಡಿಕೊಂಡು ಬರೋಣ’ ಎಂದು ಒತ್ತಾಯಿಸಿದ. ಸುಲೇಮಾನ್, ‘ನನ್ನ ಜೊತೆ ವ್ಯಾಪಾರ ಮಾಡುತ್ತಿದ್ದವರು. ಬದುಕಿದ್ದವರನ್ನು ಸತ್ತಮೇಲೆ ನೋಡೋದು ಕಷ್ಟ’ ಎಂದು ನಿರಾಕರಿಸಿದರು. ‘ಇದೇ ಗೋಡೆ ಪಕ್ಕ ನಿಂತು ಸಾವಿರಾರು ಮಕ್ಕಳಿಗೆ ಗೊಂಬೆ, ಗಿರಗಿಟ್ಲೆ ಮಾರಿದ್ದೇನೆ. ನನ್ನಂಥ ಹತ್ತಾರು ಜನ ಇಲ್ಲೇ ಬದುಕು ಕಟ್ಟಿಕೊಂಡಿದ್ದು. ಆಗ ಬಂದಿದ್ದನಲ್ಲ, ಅವ ನನ್ನ ಮಗ. ಅವನು ಮಗುವಾಗಿದ್ದಾಗ, ಎಷ್ಟೋ ದಿನ ಈ ಗೋಡೆಯ ನೆರಳಲ್ಲೇ ಅವನನ್ನು ಮಲಗಿಸಿದ್ದೆ. ಅಂಥ ಗೋಡೆಯೇ ಜೀವ ಕಿತ್ತುಕೊಂಡಿತೆಂದರೆ ನಂಬಲಾಗುತ್ತಿಲ್ಲ’ ಎಂದು ನಿಟ್ಟುಸಿರು ಬಿಟ್ಟರು.</p><p>ಜಡಿ ಮಳೆ, ನೂರಾರು ಪೊಲೀಸರು, ಕುತೂಹಲಕ್ಕೆ ನೆರೆದ ಜನರ ಗದ್ದಲದ ಮಧ್ಯ ಸುಲೇಮಾನ್ ಅವರ ಕಣ್ಣೀರು ಕಾಣಲಿಲ್ಲ, ಸುಕ್ಕುಗಟ್ಟಿದ ಅವರ ಮುಖದ ಭಾವಗಳೂ ಗೊತ್ತಾಗಲಿಲ್ಲ. ಗೋಡೆಯಡಿ ನುಜ್ಜುಗುಜ್ಜಾದ ಆಟಿಕೆಗಳು, ಬಣ್ಣದ ಫ್ರಾಕುಗಳು, ಅಡಿಮೇಲಾಗಿದ್ದ ತಳ್ಳುಗಾಡಿ ನಿಸ್ತೇಜವಾಗಿ ಬಿದ್ದಿದ್ದವು. ಸಿಜಿಯ<br>ಟಾರ್ಪಲ್ ಗೋಡೆಯ ಅಳಿದುಳಿದ ಕಂಬಿಗೆ ಜೋತುಬಿದ್ದಿತ್ತು.</p>.ಬೆಂಗಳೂರಿನಲ್ಲಿ ಭಾರಿ ಮಳೆ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ಸಾವು.ಬೆಂಗಳೂರಲ್ಲಿ ಮಳೆ ನಡುವೆ ವಿದ್ಯುತ್ ಆಘಾತ: ಇಬ್ಬರ ಸಾವು.<h2>ತಲಾ ₹5 ಲಕ್ಷ ಪರಿಹಾರ, ಗೋಡೆ ಕುಸಿತದ ತನಿಖೆ</h2><p>ಕಾಂಪೌಂಡ್ ಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಕುಸಿತದ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p><p>ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಅವರ ಪರಿಸ್ಥಿತಿಯನ್ನು ಆಲಿಸಿದರು.</p><p>ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೌರಿಂಗ್ ಆಸ್ಪತ್ರೆ ಆವರಣದಕ್ಕು ಕಾಮಗಾರಿ ನಡೆಯುತ್ತಿತ್ತು. ಅಲ್ಲಿನ ಮಣ್ಣು ತಂದು ಕಾಂಪೌಂಡ್ ಪಕ್ಕ ಸುರಿಯುತ್ತಿದ್ದರು. ಇದರ ಒತ್ತಡ ಬಿದ್ದು ಗೋಡೆ ಬಿದ್ದಿರಬಹುದು. ಕಾಂಪೌಂಡ್ ಶಿಥಿಲ ಆಗಿತ್ತೊ ಇಲ್ಲವೊ ಎಂಬುದನ್ನು ಎಂಜಿನಿಯರ್ಗಳು ಪರಿಶೀಲನೆ ನಡೆಸಿದ್ದಾರೆಯೇ ಇಲ್ಲವೆ ಎಂಬುದು ತನಿಖೆ ವೇಳೆ ಗೊತ್ತಾಗುತ್ತದೆ ಎಂದರು.</p><p>ಬೀದಿ ಬದಿ ವ್ಯಾಪಾರಿಗಳು ಶಿಥಿಲಗೊಂಡ ಕಾಂಪೌಂಡ್ ಪಕ್ಕದಲ್ಲೇ ವ್ಯಾಪಾರಕ್ಕೆ ಕೂರುತ್ತಿದ್ದರು. ಗೋಡೆಯ ಸುರಕ್ಷತೆ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದರೊ ಇಲ್ಲವೊ ಎಂಬುದರ ತನಿಖೆಯೂ ಆಗಲಿದೆ. ತಪ್ಪಿಸ್ಥರಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬದುಕು ಕಟ್ಟಿಕೊಟ್ಟ ಗೋಡೆಯೇ ಜೀವ ಕಿತ್ತುಕೊಂಡು ಬಿಟ್ಟಿತು’... </p><p>ನಗರದ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹಿಂಭಾಗದ ಗೋಡೆ ಕುಸಿದ ಘಟನೆಯಲ್ಲಿ, ಸ್ವಲ್ಪದರಲ್ಲೇ ಬದುಕುಳಿದ ಸುಲೇಮಾನ್ಖಾನ್ (78) ಅವರ ಮಾತಿದು.</p><p>ಬೌರಿಂಗ್ ಆಸ್ಪತ್ರೆಯ ಹಿಂಭಾಗದಲ್ಲಿ ರುವ ಮೀನಾಕ್ಷಿ ಗುಡಿ ಬೀದಿ ಸದಾ ಗಿಜಿಗುಡುವ ಸ್ಥಳ. ಒಂದೆಡೆ ರಸೆಲ್ ಮಾರ್ಕೆಟ್, ಸೇಂಟ್ ಬೆಸಿಲಿಕಾ ಚರ್ಚ್, ಗುಜರಿ ಬೀದಿಗೆ ಸಂಪರ್ಕ ಕಲ್ಪಿಸುವ ಮೀನಾಕ್ಷಿ ಗುಡಿ ಬೀದಿಯಲ್ಲಿ ಖರೀದಿಗೆ ಸಿಗದಿರುವ ವಸ್ತುವೇ ಇಲ್ಲ.</p><p>ಅಂತಹ ಅಂಗಡಿಗಳಿಗೆಲ್ಲಾ ಬೌರಿಂಗ್ ಆಸ್ಪತ್ರೆಯ ಹಿಂಭಾಗದ ಗೋಡೆಯೇ ಆಸರೆ.</p><p>ಅಂಗಡಿಗಳೆಂದರೆ ಅಂಗಡಿಗಳಲ್ಲ. ಆಸ್ಪತ್ರೆಯ ಕೌಂಪೌಂಡ್ಗೆ ಆತು ನಿಂತೋ ಅಥವಾ ಕುಳಿತೋ ನಾಲ್ಕಾರು ಬಟ್ಟೆ, ಷೂ, ಚಪ್ಪಲಿ, ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡುವುದು.</p><p>‘ಚರ್ಚ್ಗೆ ಬರುವ ಮಕ್ಕಳಿಗೆ ಆಟಿಕೆ ಮಾರುತ್ತಿದ್ದೆ. 50–60 ವರ್ಷಗಳಾಗಿರಬಹುದೇನೋ. ಆಗಿನಿಂದಲೂ ಇಲ್ಲಿಯೇ ಅಂಗಡಿ ಇಡುತ್ತಿದ್ದೇನೆ. ಬಟ್ಟೆಯ ಹ್ಯಾಂಗರ್, ಆಟಿಕೆ ಸ್ಟ್ಯಾಂಡ್ ಒರಗಿಸಿ ಇಡುತ್ತಿದ್ದು, ಕಡೆಗೆ ಮಳೆ–ಬಿಸಿಲಿನಿಂದ ರಕ್ಷಿಸಲು ಟಾರ್ಪಲ್ ಕಟ್ಟಿಕೊಳ್ಳುತ್ತಿದ್ದದ್ದು ಇದೇ ಗೋಡೆಗೆ’ ಎಂದು ಸುಲೇಮಾನ್ ದೀರ್ಘ ಉಸಿರು ಎಳೆದುಕೊಂಡರು.</p><p>ಬುಧವಾರ ಸಂಜೆಯವರೆಗೂ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಮಧ್ಯಾಹ್ನದ ನಂತರ ಮೋಡ ಇದ್ದುದ್ದರಿಂದ ಯಾರೂ ಟಾರ್ಪಲ್ ಬಿಚ್ಚಿರಲಿಲ್ಲ. ಮಕ್ಕಳ ಫ್ರಾಕ್ ಮಾರುವ ಸಿಜಿ ಮಾತ್ರ ಟಾರ್ಪಲ್ ಹರಡಿ ಅದರಡಿಯಲ್ಲಿ ನಿಂತಿದ್ದರು. </p><p>‘ಸಿಜಿಯ ಟಾರ್ಪಲ್ ಹರಿದುಹೋಗಿತ್ತು. ಕಳೆದ ವಾರವಷ್ಟೇ 700 ರೂಪಾಯಿ ಕೊಟ್ಟು ಟಾರ್ಪಲ್ ಹಾಕಿಸಿದ್ದ. ಬುಧವಾರವಾದ್ದರಿಂದ ಅಂಥ ವ್ಯಾಪಾರವೇನೂ ಇರಲಿಲ್ಲ. ಸಂಜೆ ಹೊತ್ತಿಗೆ ಮಳೆ ಹನಿಯಲಾರಂಭಿಸಿತು. ನನಗೆ ಟಾರ್ಪಲ್ ಇಲ್ಲದ್ದರಿಂದ ಆಟಿಕೆಗಳನ್ನು ಚೀಲಕ್ಕೆ ತುಂಬುತ್ತಿದ್ದೆ. ಮಳೆ ಜೋರಾದ ಕಾರಣ. ಅಕ್ಕಪಕ್ಕದವರೆಲ್ಲಾ ತಮ್ಮ ಚೀಲ ಎತ್ತಿಕೊಂಡು ಸಿಜಿಯ ಟಾರ್ಪಲ್ ಅಡಿಗೆ ಹೋದರು. ನನಗೆ ಜಾಸ್ತಿ ವಯಸ್ಸು. ಬೇಗ ಹೋಗಲು ಆಗಲಿಲ್ಲ. ಎದ್ದು ಅತ್ತ ಹೋಗಬೇಕು ಎನ್ನುವಷ್ಟರಲ್ಲೇ ಗೋಡೆ ಬಿತ್ತು. ಸಿಜಿಯ ಟಾರ್ಪಲ್ ಅಡಿ ನಿಂತಿದ್ದವರು ಗೋಡೆ ಕೆಳಗೆ ಸಿಕ್ಕಿಕೊಂಡರು’ ಎಂದು ಮೌನಕ್ಕೆ ಜಾರಿದರು.</p><p>ಆ ಹೊತ್ತಿಗೆ ಅಲ್ಲಿಗೆ ಬಂದ ಯುವಕನೊಬ್ಬ, ‘ಅಬ್ಬು, ಬಾ. ನೋಡಿಕೊಂಡು ಬರೋಣ’ ಎಂದು ಒತ್ತಾಯಿಸಿದ. ಸುಲೇಮಾನ್, ‘ನನ್ನ ಜೊತೆ ವ್ಯಾಪಾರ ಮಾಡುತ್ತಿದ್ದವರು. ಬದುಕಿದ್ದವರನ್ನು ಸತ್ತಮೇಲೆ ನೋಡೋದು ಕಷ್ಟ’ ಎಂದು ನಿರಾಕರಿಸಿದರು. ‘ಇದೇ ಗೋಡೆ ಪಕ್ಕ ನಿಂತು ಸಾವಿರಾರು ಮಕ್ಕಳಿಗೆ ಗೊಂಬೆ, ಗಿರಗಿಟ್ಲೆ ಮಾರಿದ್ದೇನೆ. ನನ್ನಂಥ ಹತ್ತಾರು ಜನ ಇಲ್ಲೇ ಬದುಕು ಕಟ್ಟಿಕೊಂಡಿದ್ದು. ಆಗ ಬಂದಿದ್ದನಲ್ಲ, ಅವ ನನ್ನ ಮಗ. ಅವನು ಮಗುವಾಗಿದ್ದಾಗ, ಎಷ್ಟೋ ದಿನ ಈ ಗೋಡೆಯ ನೆರಳಲ್ಲೇ ಅವನನ್ನು ಮಲಗಿಸಿದ್ದೆ. ಅಂಥ ಗೋಡೆಯೇ ಜೀವ ಕಿತ್ತುಕೊಂಡಿತೆಂದರೆ ನಂಬಲಾಗುತ್ತಿಲ್ಲ’ ಎಂದು ನಿಟ್ಟುಸಿರು ಬಿಟ್ಟರು.</p><p>ಜಡಿ ಮಳೆ, ನೂರಾರು ಪೊಲೀಸರು, ಕುತೂಹಲಕ್ಕೆ ನೆರೆದ ಜನರ ಗದ್ದಲದ ಮಧ್ಯ ಸುಲೇಮಾನ್ ಅವರ ಕಣ್ಣೀರು ಕಾಣಲಿಲ್ಲ, ಸುಕ್ಕುಗಟ್ಟಿದ ಅವರ ಮುಖದ ಭಾವಗಳೂ ಗೊತ್ತಾಗಲಿಲ್ಲ. ಗೋಡೆಯಡಿ ನುಜ್ಜುಗುಜ್ಜಾದ ಆಟಿಕೆಗಳು, ಬಣ್ಣದ ಫ್ರಾಕುಗಳು, ಅಡಿಮೇಲಾಗಿದ್ದ ತಳ್ಳುಗಾಡಿ ನಿಸ್ತೇಜವಾಗಿ ಬಿದ್ದಿದ್ದವು. ಸಿಜಿಯ<br>ಟಾರ್ಪಲ್ ಗೋಡೆಯ ಅಳಿದುಳಿದ ಕಂಬಿಗೆ ಜೋತುಬಿದ್ದಿತ್ತು.</p>.ಬೆಂಗಳೂರಿನಲ್ಲಿ ಭಾರಿ ಮಳೆ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ಸಾವು.ಬೆಂಗಳೂರಲ್ಲಿ ಮಳೆ ನಡುವೆ ವಿದ್ಯುತ್ ಆಘಾತ: ಇಬ್ಬರ ಸಾವು.<h2>ತಲಾ ₹5 ಲಕ್ಷ ಪರಿಹಾರ, ಗೋಡೆ ಕುಸಿತದ ತನಿಖೆ</h2><p>ಕಾಂಪೌಂಡ್ ಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಕುಸಿತದ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p><p>ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಅವರ ಪರಿಸ್ಥಿತಿಯನ್ನು ಆಲಿಸಿದರು.</p><p>ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೌರಿಂಗ್ ಆಸ್ಪತ್ರೆ ಆವರಣದಕ್ಕು ಕಾಮಗಾರಿ ನಡೆಯುತ್ತಿತ್ತು. ಅಲ್ಲಿನ ಮಣ್ಣು ತಂದು ಕಾಂಪೌಂಡ್ ಪಕ್ಕ ಸುರಿಯುತ್ತಿದ್ದರು. ಇದರ ಒತ್ತಡ ಬಿದ್ದು ಗೋಡೆ ಬಿದ್ದಿರಬಹುದು. ಕಾಂಪೌಂಡ್ ಶಿಥಿಲ ಆಗಿತ್ತೊ ಇಲ್ಲವೊ ಎಂಬುದನ್ನು ಎಂಜಿನಿಯರ್ಗಳು ಪರಿಶೀಲನೆ ನಡೆಸಿದ್ದಾರೆಯೇ ಇಲ್ಲವೆ ಎಂಬುದು ತನಿಖೆ ವೇಳೆ ಗೊತ್ತಾಗುತ್ತದೆ ಎಂದರು.</p><p>ಬೀದಿ ಬದಿ ವ್ಯಾಪಾರಿಗಳು ಶಿಥಿಲಗೊಂಡ ಕಾಂಪೌಂಡ್ ಪಕ್ಕದಲ್ಲೇ ವ್ಯಾಪಾರಕ್ಕೆ ಕೂರುತ್ತಿದ್ದರು. ಗೋಡೆಯ ಸುರಕ್ಷತೆ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದರೊ ಇಲ್ಲವೊ ಎಂಬುದರ ತನಿಖೆಯೂ ಆಗಲಿದೆ. ತಪ್ಪಿಸ್ಥರಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>