<p><strong>ರಾಜರಾಜೇಶ್ವರಿನಗರ:</strong> ‘ಬಸವಣ್ಣನವರು ತತ್ವಜ್ಞಾನಿ, ಸಂತ, ಸಮಾಜ ಪರಿವರ್ತನೆಯ ಹರಿಕಾರ, ಶಿಕ್ಷಣ, ಸಮಾನತೆ ಲೋಕವನ್ನು ಶಿವಲೋಕ ಮಾಡುವಲ್ಲಿ ಮುಂದಾಗಿದ್ದರು’ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.</p>.<p>ಎಂ.ಕೃಷ್ಣಸಾಗರದಲ್ಲಿ ಜಿ.ಎಸ್.ಸಾವಿತ್ರಮ್ಮ ಮತ್ತು ಕೆ.ಬಸವಯ್ಯ ಕುಟುಂಬದವರು ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ, ಶಿವಕುಮಾರ ಸ್ವಾಮೀಜಿ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಬಸವೇಶ್ವರರ, ಶರಣ ಸಂದೇಶಗಳನ್ನು ಜಗತ್ತಿಗೆ ತಿಳಿಸುವ ಮೂಲಕ ನಾವೆಲ್ಲರೂ ಅವರ ಹಾದಿಯಲ್ಲಿ ನಡೆಯಬೇಕಾಗಿದೆ’ ಎಂದರು.</p>.<p>‘ಮನುಷ್ಯನಲ್ಲಿ ಎಲ್ಲವೂ ಇದೆ. ಒಳಿತನ್ನು ಬಯಸಬೇಕು, ಕೆಡುಕನ್ನು ತೊಡೆದುಹಾಕಿ, ದ್ವೇಷ, ಅಸೂಯೆ, ಧರ್ಮಗಳ ನಡುವೆ ಕಿತ್ತಾಟ, ಕೋಮುಭಾವನೆ ತೊಡೆದು ಹಾಕುವ ಮನುಷ್ಯರಾಗಿ ಬಾಳಬೇಕು. ಆಗ ಮಾತ್ರ ದೇಶ, ವಿಶ್ವದಲ್ಲಿ ಶಾಂತಿ ಸಿಗುತ್ತದೆ’ ಎಂದು ಹೇಳಿದರು.</p>.<p>ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಸಮಸಮಾನತೆ, ಸಮಸಮಾಜವನ್ನು ಗುರಿಯಾಗಿಟ್ಟುಕೊಂಡು ಮಾನವೀಯ ಮೌಲ್ಯದ ದಾರಿಯಲ್ಲಿ ಸಾಗಬೇಕಾಗಿದೆ. ಮೌಢ್ಯ, ಅಜ್ಞಾನ, ಕಂದಾಚಾರ, ಅಸೂಯೆ, ಕೀಳರಿಮೆ, ದೂರಮಾಡಿ ನಾವೆಲ್ಲರು ಮಾನವರು ಎಂದು ಬದುಕಬೇಕು’ ಎಂದರು.</p>.<p>ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ‘ಅಭಿವೃದ್ದಿಯ ಹರಿಕಾರ ಪ್ರಶಸ್ತಿ’ ಮತ್ತು ಗುರುಬಸವಯ್ಯ, ಸುರೇಶ್, ಮಹದೇವಸ್ವಾಮಿ, ದೇವೇಂದ್ರ, ಕೆ.ಎಸ್.ಉಮಾಶಂಕರ್, ಎಸ್.ಪರಮೇಶ್ ಅವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.</p>.<p>ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಬಸವಣ್ಣ, ಶಿವಕುಮಾರ ಸ್ವಾಮೀಜಿ ಅವರು ನೊಂದವರು, ತುಳಿತಕ್ಕೆ ಒಳಗಾದ, ರೈತರು, ಹೆಣ್ಣು ಮಕ್ಕಳು, ದಲಿತರು, ಅಲ್ಪಸಂಖ್ಯಾತರಿಗೆ ಜಾತಿ, ಧರ್ಮಮೀರಿ ಶಿಕ್ಷಣ, ಅನ್ನ ಆಶ್ರಯ ನೀಡಿದರು’ ಎಂದರು.</p>.<p>ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಗದ್ದುಗೆಮಠದ ಮಹಾಂತ ಸ್ವಾಮೀಜಿ, ಸೂಲಿಕೆರೆಯ ಸಮಾಜ ಸೇವಕ ಎಸ್.ಆರ್.ಮೋಹನ್ಕುಮಾರ್, ಕರುನಾಡ ವಿಜಯಸೇನೆ ರಾಜ್ಯಘಟಕದ ಅಧ್ಯಕ್ಷ ಎಚ್.ಎನ್.ದೀಪಕ್, ದೇವಗೆರೆ ಡಿ.ವಿ.ರುದ್ರಮೂರ್ತಿ, ಆರ್.ಲಕ್ಷ್ಮಯ್ಯ, ಪಾರ್ವತಿದೇವಿ ಲಕ್ಷ್ಮಯ್ಯ, ರೈತ ಮುಖಂಡ ಕೋರಿ ಮಂಜುನಾಥ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ‘ಬಸವಣ್ಣನವರು ತತ್ವಜ್ಞಾನಿ, ಸಂತ, ಸಮಾಜ ಪರಿವರ್ತನೆಯ ಹರಿಕಾರ, ಶಿಕ್ಷಣ, ಸಮಾನತೆ ಲೋಕವನ್ನು ಶಿವಲೋಕ ಮಾಡುವಲ್ಲಿ ಮುಂದಾಗಿದ್ದರು’ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.</p>.<p>ಎಂ.ಕೃಷ್ಣಸಾಗರದಲ್ಲಿ ಜಿ.ಎಸ್.ಸಾವಿತ್ರಮ್ಮ ಮತ್ತು ಕೆ.ಬಸವಯ್ಯ ಕುಟುಂಬದವರು ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ, ಶಿವಕುಮಾರ ಸ್ವಾಮೀಜಿ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಬಸವೇಶ್ವರರ, ಶರಣ ಸಂದೇಶಗಳನ್ನು ಜಗತ್ತಿಗೆ ತಿಳಿಸುವ ಮೂಲಕ ನಾವೆಲ್ಲರೂ ಅವರ ಹಾದಿಯಲ್ಲಿ ನಡೆಯಬೇಕಾಗಿದೆ’ ಎಂದರು.</p>.<p>‘ಮನುಷ್ಯನಲ್ಲಿ ಎಲ್ಲವೂ ಇದೆ. ಒಳಿತನ್ನು ಬಯಸಬೇಕು, ಕೆಡುಕನ್ನು ತೊಡೆದುಹಾಕಿ, ದ್ವೇಷ, ಅಸೂಯೆ, ಧರ್ಮಗಳ ನಡುವೆ ಕಿತ್ತಾಟ, ಕೋಮುಭಾವನೆ ತೊಡೆದು ಹಾಕುವ ಮನುಷ್ಯರಾಗಿ ಬಾಳಬೇಕು. ಆಗ ಮಾತ್ರ ದೇಶ, ವಿಶ್ವದಲ್ಲಿ ಶಾಂತಿ ಸಿಗುತ್ತದೆ’ ಎಂದು ಹೇಳಿದರು.</p>.<p>ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಸಮಸಮಾನತೆ, ಸಮಸಮಾಜವನ್ನು ಗುರಿಯಾಗಿಟ್ಟುಕೊಂಡು ಮಾನವೀಯ ಮೌಲ್ಯದ ದಾರಿಯಲ್ಲಿ ಸಾಗಬೇಕಾಗಿದೆ. ಮೌಢ್ಯ, ಅಜ್ಞಾನ, ಕಂದಾಚಾರ, ಅಸೂಯೆ, ಕೀಳರಿಮೆ, ದೂರಮಾಡಿ ನಾವೆಲ್ಲರು ಮಾನವರು ಎಂದು ಬದುಕಬೇಕು’ ಎಂದರು.</p>.<p>ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ‘ಅಭಿವೃದ್ದಿಯ ಹರಿಕಾರ ಪ್ರಶಸ್ತಿ’ ಮತ್ತು ಗುರುಬಸವಯ್ಯ, ಸುರೇಶ್, ಮಹದೇವಸ್ವಾಮಿ, ದೇವೇಂದ್ರ, ಕೆ.ಎಸ್.ಉಮಾಶಂಕರ್, ಎಸ್.ಪರಮೇಶ್ ಅವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.</p>.<p>ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಬಸವಣ್ಣ, ಶಿವಕುಮಾರ ಸ್ವಾಮೀಜಿ ಅವರು ನೊಂದವರು, ತುಳಿತಕ್ಕೆ ಒಳಗಾದ, ರೈತರು, ಹೆಣ್ಣು ಮಕ್ಕಳು, ದಲಿತರು, ಅಲ್ಪಸಂಖ್ಯಾತರಿಗೆ ಜಾತಿ, ಧರ್ಮಮೀರಿ ಶಿಕ್ಷಣ, ಅನ್ನ ಆಶ್ರಯ ನೀಡಿದರು’ ಎಂದರು.</p>.<p>ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಗದ್ದುಗೆಮಠದ ಮಹಾಂತ ಸ್ವಾಮೀಜಿ, ಸೂಲಿಕೆರೆಯ ಸಮಾಜ ಸೇವಕ ಎಸ್.ಆರ್.ಮೋಹನ್ಕುಮಾರ್, ಕರುನಾಡ ವಿಜಯಸೇನೆ ರಾಜ್ಯಘಟಕದ ಅಧ್ಯಕ್ಷ ಎಚ್.ಎನ್.ದೀಪಕ್, ದೇವಗೆರೆ ಡಿ.ವಿ.ರುದ್ರಮೂರ್ತಿ, ಆರ್.ಲಕ್ಷ್ಮಯ್ಯ, ಪಾರ್ವತಿದೇವಿ ಲಕ್ಷ್ಮಯ್ಯ, ರೈತ ಮುಖಂಡ ಕೋರಿ ಮಂಜುನಾಥ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>