ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಮೂರ್ತಿ ‘ಸಂಸ ರಂಗಮಂದಿರಕ್ಕೆ ಬಂದಾಗಲೆಲ್ಲಾ ಸಿಜಿಕೆ ನೆನಪಾಗುತ್ತಾರೆ. ಒಬ್ಬ ವ್ಯಕ್ತಿ ಸೃಜಶೀಲ, ಚಲನಶೀಲ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಂಸ್ಕೃತಿಕ ವಲಯ
ವನ್ನು ಕಟ್ಟಬಹುದು ಎಂಬುದಕ್ಕೆ ಸಿಜಿಕೆಯವರೇ ಸಾಕ್ಷಿ. ನಾಟಕ ಕ್ಷೇತ್ರದಲ್ಲಿ ಸಾತ್ವಿಕತೆ ಇದೆ. ಎಷ್ಟೇ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣವನ್ನು ನಾಟಕ ರಂಗ ನಮಗೆಲ್ಲ ಕಲಿಸಿಕೊಟ್ಟಿದೆ’ ಎಂದರು.