ಇಲಾಖೆಯ ಕಾಯಂ ನೌಕಕರಿಗೆ ಸಮನಾಗಿ ನಾವು ಕೆಲಸ ಮಾಡುತ್ತಿದ್ದರೂ ನಮಗೆ ನಿಕೃಷ್ಟ ಸಂಭಾವನೆ ನೀಡಿ, ಉದ್ಯೋಗ ಭದ್ರತೆ, ವಿಮೆ, ಪಿಂಚಣಿ, ಮೂಲ ಸೌಕರ್ಯ ಮತ್ತಿತರೆ ಯಾವುದೇ ಸೌಲಭ್ಯಗಳನ್ನು ಇಲಾಖೆಯು ನೀಡುತ್ತಿಲ್ಲ. ನಮ್ಮ ಹಕ್ಕುಗಳ ಈಡೇರಿಕೆಗಾಗಿ ನಾವು ಈ ಮೊದಲು ಮುಷ್ಕರ ಮಾಡಿದ್ದಾಗ ಪರಿಶೀಲಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದು ಹೋಗಿವೆ ಎಂದು ಹೇಳಿದರು.