‘ಕಾಲೇಜಿನ ಹಾಸ್ಟೆಲ್ನ ಒಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಸೆ. 23ರಂದು ನೀರು ಪೂರೈಕೆ ಸ್ಥಗಿತಗೊಂಡಿತ್ತು. ಒಂದೇ ದಿನದಲ್ಲಿ ಈ ಸಮಸ್ಯೆ ಪರಿಹಾರವಾಗಿತ್ತು. ಆದರೂ ಕಿಡಿಗೇಡಿಗಳು ಹಾಸ್ಟೆಲ್ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳ ಜೊತೆ ಸೇರಿ ಕಾಲೇಜಿನ ಬಸ್, ಎಲೆಕ್ಟ್ರಿಕಲ್ ವ್ಯವಸ್ಥೆಗೆ ಹಾನಿ ಉಂಟು ಮಾಡಿದ್ದರು. ಈ ಬಗ್ಗೆ ವಿಚಾರಣೆಗೆ ಏಳು ಜನರ ಸಮಿತಿ ರಚಿಸಲಾಗಿತ್ತು. ಸಾಕ್ಷ್ಯಗಳ ಆಧಾರದಲ್ಲಿ 19 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಈ ಪೈಕಿ ಶ್ರೀಹರ್ಷನ ಹೆಸರು ಇರಲಿಲ್ಲ. ಆದರೆ, ಇತರ ವಿದ್ಯಾರ್ಥಿಗಳ ಜೊತೆ ಶ್ರೀಹರ್ಷನನ್ನೂ ವಿಚಾರಣೆಗೆ ಕರೆಸಲಾಗಿತ್ತು. ಕೆಲವು ವಿದ್ಯಾರ್ಥಿಗಳು ಘಟನೆಯಲ್ಲಿ ಶ್ರೀಹರ್ಷ ಕೂಡಾ ಭಾಗಿಯಾಗಿದ್ದ ಎಂದಿದ್ದರು. ಈ ಕಾರಣಕ್ಕೆ ತಂದೆಯ ಜೊತೆ ವಿಚಾರಣೆಗೆ ಹಾಜರಾಗುವಂತೆ ಶ್ರೀಹರ್ಷನಿಗೂ ತಿಳಿಸಲಾಗಿತ್ತು’