ಬೆಂಗಳೂರು: ‘ಮುಖ್ಯಮಂತ್ರಿಯಾಗಿದ್ದಾಗ ರೋಗಗ್ರಸ್ತ ಕಾಗೆಯೊಂದು ನನ್ನ ಕಾರಿನ ಮೇಲೆ ಕುಳಿತುಕೊಂಡಿದ್ದನ್ನು ಮುಂದಿಟ್ಟುಕೊಂಡು ಟಿ.ವಿ. ಮಾಧ್ಯಮಗಳಲ್ಲಿ ನನ್ನ ಅಧಿಕಾರವಧಿ ಬಗ್ಗೆ ಸುಧೀರ್ಘ ಚರ್ಚೆಗಳು ನಡೆದವು. ಜ್ಯೋತಿಷಿಗಳು ಇದಕ್ಕೆ ಬೇರೆ ಬೇರೆ ಬಣ್ಣ ನೀಡಿದರು. ಆದರೂ, ನಾನು ಐದು ವರ್ಷಗಳ ಅಧಿಕಾರ ಪೂರೈಸಿದೆ’ ಎಂದುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.