ಭೋವಿ ಗುರುಪೀಠದ ಸಿದ್ಧರಾಮೇಶ್ವರ ಸಂಸ್ಥಾನದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಜಾತ್ರೆಯ ಮೂಲಕ ಆಚರಿಸುವ ಬದಲಾಗಿ ಜಾಗೃತಿಯ ರೂಪದಲ್ಲಿ ಆಚರಿಸಬೇಕು ಅತ್ಯಂತ ತಳಮಟ್ಟದ ಶ್ರಮಿಕ ವರ್ಗದವರನ್ನು ಹೊಂದಿರುವ ಸಮಾಜಕ್ಕೆ ಜಾಗೃತಿಯ ಅವಶ್ಯಕತೆ ಹೆಚ್ಚಾಗಿದೆ. ಎಲ್ಲ ನಾಯಕರೂ ಪಕ್ಷಬೇಧ ಮರೆತು, ಭೋವಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಹೇಳಿದರು.