‘ಕಂಪನಿಯ ಪರವಾನಗಿ ನವೀಕರಣಕ್ಕೆ ಕೋರಿಕೆ ಸಲ್ಲಿಸುವ ವೇಳೆ ಹೂಡಿಕೆಯಾದ ಹಣ, ಲಾಭಾಂಶ ಹಂಚಿಕೆ, ಅದರ ಮೂಲ ಎಲ್ಲವನ್ನೂ ಬಹಿರಂಗಪಡಿಸಬೇಕು. ಈ ಬಗ್ಗೆ ಸಂಬಂಧಿಸಿದ ಏಜೆನ್ಸಿಗಳೂ ನಿಗಾ ವಹಿಸಬೇಕು. ಅದಕ್ಕೆಂದೇ ಸಂಸ್ಥೆಗಳ ಬಳಿ ಮಾರುಕಟ್ಟೆ ಗುಪ್ತ ಮಾಹಿತಿ ಪಡೆಯುವ ವ್ಯವಸ್ಥೆ ಇದೆ. ಲೋಪಗಳು ಕಂಡುಬಂದರೆ ಸಂಸ್ಥೆಯ ಮಾಲೀಕರ ಗಮನಕ್ಕೆ ತರೆಬೇಕು. ಸಂದೇಹ ಬಂದರೆ ಪೊಲೀಸರಿಗೆ ದೂರು ನೀಡಬೇಕು. ಆರ್ಬಿಐಗೂ ಮಾಹಿತಿ ನೀಡಬೇಕು. ಬಳಿಕ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಬೇಕು. ಅಂತಹ ಸಂಸ್ಥೆಯ ವ್ಯವಹಾರಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಜನರಿಗೆ ತಿಳಿಹೇಳಬೇಕು. ಆದರೆ, ದುರದೃಷ್ಟವಶಾತ್ ಐಎಂಎ ವಿಚಾರದಲ್ಲಿ ಇದು ಯಾವುದೂ ಪಾಲನೆ ಆಗಿಲ್ಲ’.