ಬಸವಕಲ್ಯಾಣ: ನೂತನ ತಾಲ್ಲೂಕು ಕೇಂದ್ರ ಹುಲಸೂರನಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಗುರುವಾರ ಕಾರ್ಯಾರಂಭಗೊಂಡಿತು. ಉದ್ಘಾಟನೆಯಾದರೂ ಕಾರ್ಯಾರಂಭಗೊಳ್ಳದ ಕಟ್ಟಡ ಎಂದು ಪ್ರಜಾವಾಣಿಯಲ್ಲಿ ಮೇ 22 ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು ಅದಕ್ಕೆ ಫಲಶ್ರುತಿ ದೊರೆತಿದೆ.
ಆಸ್ಪತ್ರೆ ಮುಖ್ಯವೈದ್ಯ ಡಾ.ಅರಿಫೊದ್ದೀನ್ ಉದ್ಘಾಟಿಸಿದ್ದಾರೆ. ಡಾ.ಶಿವಲೀಲಾ, ಡಾ.ಮಹೇಶ್ವರಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
`ಹೊಸ ಕಟ್ಟಡದಲ್ಲಿ ಚಿಕಿತ್ಸೆ ನೀಡಲು ಆರಂಭಿಸಿರುವುದು ಸಂತಸದ ಸಂಗತಿಯಾಗಿದೆ. ಆಸ್ಪತ್ರೆಯಲ್ಲಿನ ಮೂರು ವೈದ್ಯರ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು' ಎಂದು ಬಸವರಾಜ ಕವಟೆ ಆಗ್ರಹಿಸಿದ್ದಾರೆ.
`ಆಸ್ಪತ್ರೆಯಲ್ಲಿ ಎಕ್ಸರೇ ಯಂತ್ರವಿದ್ದರೂ ಆಪರೇಟರ್ ಇಲ್ಲ. ಈ ಸ್ಥಾನವನ್ನು ಕೂಡ ತುಂಬಬೇಕು'
ಎಂದು ಶಿವರಾಜ ಖಪಲೆ ಒತ್ತಾಯಿಸಿದ್ದಾರೆ.